Skip to content

ಜನಲೋಕಪಾಲ್ ನಿಂದ ಸರ್ವಾಧಿಕಾರಿ ಸೃಷ್ಟಿಯಾಗುವ ಸಾಧ್ಯತೆ: ಶ್ರೀರಾಮ ದಿವಾಣ

December 28, 2011

ಉಡುಪಿ: ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಉಪಯೋಗಿಸುವ ಮೂಲಕ ಬಹಳಷ್ಟು ಹಗರಣಗಳನ್ನು ಬಯಲುಮಾಡಲು ಸಾಧ್ಯ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಆರ್ ಟಿ ಐ ಒಂದು ಪರಿಣಾಮಕಾರಿ ಅಸ್ತ್ರ. ಜನಲೋಕಪಾಲ್ ಗೆ ಒತ್ತಾಯಿಸಿ ಅದು ಜ್ಯಾರಿಯಾದರೆ, ದೇಶದಲ್ಲೊಬ್ಬ ಸರ್ವಾಧಿಕಾರಿ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಹೀಗೆ ಮಾಡುವ ಬದಲು, ಈಗ ಇರುವ ಕಾನೂನುಗಳನ್ನು ಪ್ರತಿಯೊಬ್ಬನೂ ಬಳಸಿಕೊಳ್ಳುವ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಸಾಧಿಸಲು ಸಾಧ್ಯ ಎಂದು ಜನಪರ ರಾಜಕೀಯ ಮತ್ತು udupibits.com ನ ಸಂಪಾದಕರೂ, ಕರ್ನಾಟಕ ಜನಪರ ವೇದಿಕೆಯ ಸಂಚಾಲಕರೂ ಆದ ಶ್ರೀರಾಮ ದಿವಾಣ ಹೇಳಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಡಿ.27 ರಂದು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ಉಪನ್ಯಾಸ ನೀಡಿ ದಿವಾಣ ಮಾತನಾಡುತ್ತಿದ್ದರು.
ಶಿಬಿರಾಧಿಕಾರಿಗಳಾದ ಶ್ರೀಮತಿ ಅನ್ನಮ್ಮ, ಜೋಸೆಫ್ ಪೀಟರ್ ಫೆರ್ನಾಂಡಿಸ್, ಸಹಾಯಕ ಶಿಬಿರಾಧಿಕಾರಿಗಳಾದ ಮಂಜುನಾಥ್, ಶ್ರೀಮತಿ ಪೂರ್ಣಿಮಾ, ಕು.ಪುಷ್ಪಾ ಹಾಗೂ ಭರತ್ ಕುಮಾರ್ ಉಪಸ್ಥಿತರಿದ್ದರು.

No comments yet

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.